ನಾಡ ಪಟ್ರಿಕೆ ಕನ್ನಡ ನ್ಯೂಸ್ ಪೇಪರ್, ಕರ್ನಾಟಕದಲ್ಲಿ 1998ರಿಂದ ಪ್ರಸಿದ್ಧವಾಗಿದೆ. ಸಮಕಾಲೀನ ಘಟನೆಗಳು, ಸಾಮಾಜಿಕ ವಿಷಯಗಳು ಮತ್ತು ಸಾಂಸ್ಕೃತಿಕ ಮಾಹಿತಿಗಳನ್ನು ಒಳಗೊಂಡ...
ಚಿಕ್ಕಬಳ್ಳಾಪುರ: ಕಂದಾಯ ಸಚಿವ ಕೃಷ್ಣ ಭೈರೇಗೌಡ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ಪುನಃ ಶುರುವಾಗಿದೆ. ಇವತ್ತು ಚಿಕ್ಕಬಳ್ಳಾಪುರದಲ್ಲಿ ಮಾಧ...
ನಾಡ ಪತ್ರಿಕೆ 1998 ರಿಂದ ಕರ್ನಾಟಕದಲ್ಲಿ ಕನ್ನಡ ಸುದ್ದಿಯನ್ನು ನೀಡುತ್ತಿದೆ. ನಮ್ಮ ಉದ್ದೇಶವು ನಿಖರ ಮತ್ತು ನಿಖರವಾದ ಮಾಹಿತಿಯನ್ನು ಒದಗಿಸುವುದು, ನಮ್ಮ ಓದುಗರಿಗೆ ಸಮಕ...
ಚಿಕ್ಕಬಳ್ಳಾಪುರ: ಕಂದಾಯ ಸಚಿವ ಕೃಷ್ಣ ಭೈರೇಗೌಡ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ಪುನಃ ಶುರುವಾಗಿದೆ. ಇವತ್ತು ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಭೈರೇಗೌಡ, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮಗನ ಸೋಲಿನ ನಂತರ ಕುಮಾರಸ್ವಾಮಿ ಫ್ರಸ್ಟೇಟ್ ಆಗಿದ್ದಾರೆ, ಅವರಿಗೆ ಬಿಜೆಪಿಯರಿಂದಲೇ ಮೋಸವಾಗಿದೆ, ಯಾಕೆಂದರೆ ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಅಬ್ಯರ್ಥಿಯಾಗಿ ಸ್ಪರ್ಧಿಸಿ ಕುಮಾರಸ್ವಾಮಿ ಗಳಿಸದ ವೋಟುಗಳಿಗಿಂತ 12 ಸಾವಿರ ಮತಗಳನ್ನು ಅವರ ಮಗ ಕಮ್ಮಿ ಪಡೆದಿದ್ದಾರೆ. ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿಗೆ ಬಿಜೆಪಿಯಿಂದ ಮೋಸವಾಗಿರೋದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಸಚಿವ ಹೇಳಿದರು.